ಬುಧವಾರ, ಡಿಸೆಂಬರ್ 28, 2011

ದ್ವಿಪದಿ


ಬಣ್ಣದ ಕವಿತೆ ಬರೆಯಲು ಹೋದೆ ಕೆಂಪಾಯಿತು
ಭಾರದ ಕವಿತೆ ಬರೆಯದೆ ಉಳಿದರೂ ಹಸಿರಾಗಲಿಲ್ಲ

ಯಾರು ಊರಿದ ಬೀಜವೋ ಈ ಮರದ ತುಂಬ ಬರೀ ಹಣ್ಣು
ತಿನ್ನಲಾಗದು ಗಾಯ ಮಾಡಿದವರ ಹೆಸರು ಹೇಳುವಂತಿಲ್ಲ ಬಾಯೆಲ್ಲ ಹುಣ್ಣು

ಹೇಳಬೇಡವೇ ಮುದ್ದು ಸುರಿಸಿದ ಕಣ್ಣೀರಿನ ಲೆಕ್ಕ ಯಾರಿಗೂ
ಮಾಡದ ಸಾಲ ತೀರೋವರೆಗೂ ಹೆಣಗಲೇಬೇಕು ನಾಡ ಪ್ರಭುವಾಜ್ಞೆ ಸುಮ್ಮನೆ ಅಲ್ಲ

ಬಂದೆಯಾ ಬಾ ಮಲಗಲು ಇಲ್ಲಿ ಕಂಬಳಿಯಿಲ್ಲ ಏನು ಮಾಡೋದು
ಬೀದಿಯ ಹಾಳು ಮಣ್ಣಾದರೂ ಆದೀತು ಹೊಟ್ಟೆಗೆ ಹಳಸಲಿಗೂ ಗತಿಯಿಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ