ಬುಧವಾರ, ಡಿಸೆಂಬರ್ 28, 2011

ದ್ವಿಪದಿಗಳು

ಆ ಬಾಡಿದ ಕನಸುಗಳ ನನ್ನ ಕಳ್ಳ ಕಣ್ಣುಗಳಲಿ ಎತ್ತಿಕೊಂಡೆ
ನಿಜ ದಾರಿಹೋಕರು ಮಾಡಿದ ಗಾಯ ಬಲು ಭೀಕರ

ಈ ಜಾವ ಎಳೆ ಮುತ್ತುಗಳು ಅರಳುತ್ತಿವೆ ಕೆಂಪಾಗಿ ಏಕೋ
ಕೂಡಿ ಉಣ್ಣುವ ಕನಸು ಕಾಣದಿದ್ದರೆ ಗಂಟೇನು ಹೋಗುವುದಿತ್ತು

ಬೇಡ ಮಹರಾಯ ಭಿಕಾರಿಗೆ ಬಣ್ಣದ ಷಟರ್ು ಒಪ್ಪುವುದಿಲ್ಲ
ಹೊಟ್ಟೆಗಿಲ್ಲವ್ವ ಬಟ್ಟೆಯ ಮಾತೇಕೆ ಇವಳಿಗೆ ಹೇಳಿ ಪ್ರಯೋಜನವಿಲ್ಲ

ನಿದಿರೆಯಿಲ್ಲದ ಕಣ್ಣು ನಿನ್ನವು ಯಾವಾಗಲೂ ಒರಗಿಕೊಳ್ಳುವ ಕಲ್ಲಿನ ಪ್ರಶ್ನೆ
ಯಾರು ಹೇಳಬೇಕು ಆ ಭಂಡಿಗೆ ಖಾಲಿ ಹೊಟ್ಟೆಯ ಕಣ್ಣು ಹಿಡಿಸುವುದಿಲ್ಲವಂತೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ